
|| ಹರಿಃ ಓಂ. ಶ್ರೀ ಗುರುಭ್ಯೋ ನಮಃ.||

ಶ್ರೀ ಕ್ಷೇತ್ರ ಹುಬ್ಬಳ್ಳಿ ಧಾರವಾಡ ಶ್ರೀ ಅದ್ವೈತ ಪೀಠದ ಸ್ವಾಮೀಜಿ
ಶ್ರೀ ಶ್ರೀ ಶಿವಾನಂದ ಭಾರತೀ ಮಹಾಸ್ವಾಮಿಗಳ
52 ನೇ ವರ್ಧಂತಿ ಮಹೋತ್ಸವ ಸಮಾರಂಭ
ಇದೇ ತಿಂಗಳು 23 ನೇ ತಾರೀಖು 23-12-2025 ರಂದು ಬೆಳಿಗ್ಗೆ ಶ್ರೀಗಳ ಆಹ್ನಿಕ ದರ್ಶನದಿಂದ ಪ್ರಾರಂಭವಾಗಿ ತದನಂತರ ಹೋಮ ಹವನಾದಿ ಕಾರ್ಯಕ್ರಮಗಳು ನಡೆಯಲಿವೆ. ಪೂರ್ಣಾಹುತಿ ಮಧ್ಯಾಹ್ನ 12.30 ಕ್ಕೆ ಜರುಗಲಿದೆ. ನಂತರ ಶ್ರೀಗಳವರಿಂದ ಸಂಸ್ಥಾನದ ಪೂಜೆ, ಮಹಾ ಮಂಗಳಾರತಿ. ಶ್ರೀಗಳಿಂದ ಆಶೀರ್ವಚನ ನಂತರ ಫಲಮಂತ್ರಾಕ್ಷತೆ ವಿತರಣೆ ಹಾಗೂ ಮಹಾ ಪ್ರಸಾದ ವಿನಿಯೋಗ ನಡೆಯಲಿದೆ.
ಕುಟುಂಬದ ಎಲ್ಲಾ ಸದಸ್ಯರೂ ತಮ್ಮ ತನು ಮನ ಧನ ಧಾನ್ಯ ಸಹಾಯ ನೀಡಿ ಶ್ರೀ ಅದ್ವೈತ ಪೀಠದ ಹಾಗೂ ಶ್ರೀಗಳ ಅನುಗ್ರಹ ಹಾಗೂ ಆಶೀರ್ವಾದ ಪಡೆಯಲು ಸದಾವಕಾಶ.
ವಿವರಕ್ಕೆ ಸಂಪರ್ಕ ಸಂಖ್ಯೆ 9036684643 ಧರ್ಮಾಧಿಕಾರಿಗಳು.